ಮಾಸ್ತಿ ಮೂವೀಸ್ ಮಾಸ್ತಿ ಜಾಕೀರ್ ಅಲಿಖಾನ್ಆಖಿಲ್ಖಾನ್. ಎಂ.ಜಿ ಅವರು ನಿರ್ಮಿಸುತ್ತಿರುವ ‘ಬೆಂಕಿಪಟ್ನ‘ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ತಮ್ಮ ಧ್ವನಿ ಮೂಲಕ ಖ್ಯಾತ ನಿರ್ದೇಶಕ ಯೋಗರಾಜ್ಭಟ್ ಪಾತ್ರಗಳ ಬಗ್ಗೆ ನಿರೂಪಣೆ ಮಾಡಿದ್ದಾರೆ.
ಯುವಪ್ರತಿಭೆ ಟಿ.ಕೆ.ದಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಸ್ವೀವ್ಕೌಶಿಕ್ ಸಂಗೀತ ನೀಡಿದ್ದಾರೆ. ನಿರಂಜನ್ಬಾಬು ಕ್ಯಾಮೆರಾ, ಜೋ.ನಿ.ಹರ್ಷ ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಶ್ವಿನ್ ಎನ್.ಕೆ ಅವರ ನಿರ್ಮಾಣ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಸ್.ಸಿ. ದಿನೇಶ್ಕುಮಾರ್.
ಪ್ರತಾಪ್ ನಾರಾಯಣ್, ಅನುಶ್ರೀ, ಪ್ರಕಾಶ್ ಬೆಳವಾಡಿ, ಅರುಣ್ಸಾಗರ್, ಜಹಾಂಗೀರ್, ರಂಗಶಂಕರ ಮಂಜು, ಬಿ.ಸುರೇಶ್, ಶ್ವೇತಾ ಬಡಿಗೇರ್, ರೇಣುಕಾ, ಸಂಪತ್, ಕೆಂಪರಾಜು ದೊಡ್ಡಟ್ಟಿ. ಲಕ್ಪ್ಷ್ಮಣ್, ಸ.ಸು. ವಿಶ್ವನಾಥ್ ಮುಂತಾದವರು ‘ಬೆಂಕಿಪಟ್ನ‘ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.